ಇತ್ತೀಚೆಗೆ ದೆಹಲಿಯಲ್ಲಿ (Delhi) ಅದ್ಧೂರಿಯಾಗಿರುವ ರಾಮಾಯಣ ಇವೆಂಟ್ ನಡೆದಿದೆ. ಈ ಇವೆಂಟ್ನಲ್ಲಿ (Event) ರಾಮಾಯಣ (Ramayana) ಸಿನಿಮಾದ ಸ್ಟಾರ್ಗಳು ಭಾಗವಹಿಸಿದ್ದರು. ಸೀತೆಯಾಗಿ ನಟಿಸೋ
ಸಾಯಿ ಪಲ್ಲವಿ, ರಾಮನಾಗಿ ನಟಿಸೋ ರಣಬೀರ್ ಕಪೂರ್, ರಾವಣನಾಗಿ ನಟಿಸೋ ಯಶ್ (Yash) ಪ್ರಮುಖ ಆಕರ್ಷಣೆಯಾದರು.
ನನವದೆಹಲಿಯಲ್ಲಿ ನಡೆದ ಅದ್ಧೂರಿ ‘ರಾಮಾಯಣ’ ಇವೆಂಟ್ನಲ್ಲಿ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ದೊರೆತ ನಂತರ ಕನ್ನಡ ಸೂಪರ್ಸ್ಟಾರ್ ಯಶ್ ಗಮನ ಸೆಳೆದರು. ಅವರ ಫೋಟೋ ಹಾಗೂ ವಿಡಿಯೋಗಳು ವೈರಲ್ ಆದವು.
ನಟ ರಣಬೀರ್ ಕಪೂರ್ , ಸಾಯಿ ಪಲ್ಲವಿ , ಸನ್ನಿ ಡಿಯೋಲ್ ಮತ್ತು ಉಳಿದ ಪಾತ್ರವರ್ಗದೊಂದಿಗೆ ವೇದಿಕೆಗೆ ಬರುತ್ತಿದ್ದಂತೆ, ಸ್ಥಳದಲ್ಲಿ “ಡ್ಯಾಡಿ ಈಸ್ ಹೋಮ್” ಎಂಬ ಘೋಷಣೆಗಳು ಕೇಳಿಬಂದವು.
ಈ ಮಾತನ್ನು ಕೇಳ್ತಿದ್ದಂತೆ ಯಶ್ ನಾಚಿಕೊಂಡು ಸ್ಮೈಲ್ ಮಾಡಿದ್ದಾರೆ. ಇದು ಅವರ ಅಪ್ ಕಮಿಂಗ್ ಮೂವಿ ಟಾಕ್ಸಿಕ್ನ ಡೈಲಾಗ್ ಆಗಿದ್ದು ತಕ್ಷಣ ಗಮನ ಸೆಳೆಯಿತು.
ಈ ಮೊಮೆಂಟ್ ಸೋಷಿಯಲ್ ಮಿಡಿಯಾದಲ್ಲಿ ಆ ನಂತರ ವೈರಲ್ ಆಗಿದೆ. ಜುಲೈ 24 ರಂದು ‘ರಾಮಾಯಣ: ಭಾಗ 1’ ಟ್ರೇಲರ್ ಬಿಡುಗಡೆಗೂ ಮುನ್ನ ಯಶ್ ಅವರ ಎಂಟ್ರಿಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಜುಲೈ 24 ರಂದು ‘ರಾಮಾಯಣ: ಭಾಗ 1’ ಟ್ರೇಲರ್ ಬಿಡುಗಡೆಗೂ ಮುನ್ನ ಉತ್ಸಾಹ ಹೆಚ್ಚುತ್ತಲೇ ಇದೆ. ಇಂಡಿಯಾ ಟುಡೇ ವರದಿ ಮಾಡಿದಂತೆ, ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ವೇದಿಕೆಯಲ್ಲಿ ಮಾತನಾಡಿದ ನಂತರ ಯಶ್ ಎಲ್ಲರಿಗೂ ಪ್ರೀತಿಯಿಂದ ಶುಭಾಶಯ ಕೋರಿದ್ದಾರೆ.
ವಿಭಿನ್ನ ಭಾಷೆಗಳಲ್ಲಿ ಗ್ರೀಟ್ ಮಾಡಿದ ಯಶ್
ಬಹು ಭಾಷೆಗಳಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ನಮಸ್ಕಾರ, ನಮಸ್ಕಾರಂ, ವನಕ್ಕಂ, ಸ್ವಾಗತಂ, ನಮಷ್ಕಾರ್ (sic).” ಎಂದು ಸಂಬೋಧಿಸಿದರು. ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಭಾಗಿಯಾಗಿರುವ ಬಗ್ಗೆ ನಟ ತಮ್ಮ ಭಾವನೆಗಳನ್ನು ಸಂಕ್ಷಿಪ್ತವಾಗಿ ಹಂಚಿಕೊಂಡರು.
ಇದನ್ನೂ ಓದಿ: Salman Khan: ಹೆಲ್ತ್ ರೂಮರ್ಸ್ ಜೋರಾಗ್ತಿದ್ದಂತೆ ಬ್ಲ್ಯಾಕ್ & ವೈಟ್ ಫೊಟೋ ಶೇರ್ ಮಾಡಿದ ಸಲ್ಮಾನ್ ಖಾನ್ ಕೇಳಿದ ಪ್ರಶ್ನೆ ಏನು ಗೊತ್ತಾ?
ದೆಹಲಿಯಲ್ಲಿ ನಡೆದ ಭವ್ಯ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಹತ್ವಾಕಾಂಕ್ಷೆಯ ಈ ಸಿನಿಮಾ ತಮಗೆ ಮಹತ್ವದ ಪಾತ್ರದಲ್ಲಿ ನಟಿಸಲು ಅವಕಾಶ ನೀಡಿದ್ದಷ್ಟೇ ಅಲ್ಲದೆ ಹಿಂದಿ ಕಲಿಯಲು ಸಹ ಸಹಾಯ ಮಾಡಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: Vijay: ಸಿಎಂ ವಿಜಯ್ಗೆ ಬೆದರಿಕೆ, DMK ಶಾಸಕನ ವಶಕ್ಕೆ ಪಡೆದ ಪೊಲೀಸ್
ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ಕೃತಜ್ಞತೆ ಸಲ್ಲಿಸಿದ ಯಶ್, ತಮ್ಮನ್ನು ಈ ಪ್ರಾಜೆಕ್ಟ್ಗೆ ಕರೆತಂದಿದ್ದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಈ ಸಿನಿಮಾ ಎಂದೂ ಮರೆಯಲಾಗದ ಒಂದು ಪ್ರಯಾಣ ಎಂದು ಯಶ್ ಹೇಳಿದರು.














