ಬೆಂಗಳೂರು: ರಾಜ್ಯದಾದ್ಯಂತ ಮುಂಗಾರು ಮಳೆ (Rain) ಮತ್ತೆ ಚುರುಕುಗೊಂಡಿದ್ದು, ಕಾವೇರಿ (Cauvery) ಮತ್ತು ಕೃಷ್ಣಾ ಬೇಸಿನ್ನ ಪ್ರಮುಖ ಜಲಾಶಯಗಳಿಗೆ (Reservoirs) ಒಳಹರಿವು ಗಣನೀಯವಾಗಿ
ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಪ್ರಭಾವದಿಂದಾಗಿ ಕರ್ನಾಟಕದ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ರೈತರು ಹಾಗೂ ಸಾರ್ವಜನಿಕರಲ್ಲಿ ಮಂದಹಾಸ ಮೂಡಿಸಿದೆ.ರಾಜ್ಯದ ಪ್ರಮುಖ ಜಲಾಶಯಗಳ ಇತ್ತೀಚಿನ ನೀರಿನ ಮಟ್ಟದ (Dam Water Level) ಸಂಪೂರ್ಣ ವಿವರಗಳು ಇಲ್ಲಿವೆ ನೋಡಿ.
ಕಾವೇರಿ ಕೊಳ್ಳದ ಜಲಾಶಯಗಳ ಸ್ಥಿತಿಗತಿ
ಹಾರಂಗಿ ಅಣೆಕಟ್ಟು: 61.235% ಭರ್ತಿಯಾಗಿದ್ದು, ಪ್ರಸ್ತುತ ಒಳಹರಿವು ಹೆಚ್ಚಿದ್ದು, ಡ್ಯಾಮ್ಗೆ ನೀರು ಹರಿದುಬರುತ್ತಿದೆ.
ಹೇಮಾವತಿ ಅಣೆಕಟ್ಟು: 80.612% ಭರ್ತಿಯಾಗಿದ್ದು, ಜುಲೈ 22ರ ಅಂಕಿಅಂಶದಂತೆ ಉತ್ತಮ ಪ್ರಮಾಣದ ನೀರು ಸಂಗ್ರಹಗೊಂಡಿದ್ದು, ಒಳಹರಿವು ಮುಂದುವರಿದಿದೆ.
ಕೆ.ಆರ್.ಎಸ್ ಅಣೆಕಟ್ಟು: 35.018% ಭರ್ತಿಯಾಗಿದ್ದು, ಮಂಡ್ಯದ ಜೀವನಾಡಿಯಾಗಿರುವ ಕೆ.ಆರ್.ಎಸ್ ಡ್ಯಾಮ್ಗೆ ಒಳಹರಿವು ಏರಿಕೆಯಾಗುತ್ತಿದ್ದು, ನೀರಿನ ಮಟ್ಟ ಸುಧಾರಿಸುತ್ತಿದೆ.
ಕಬಿನಿ ಅಣೆಕಟ್ಟು: 65.587% ಭರ್ತಿಯಾಗಿದ್ದು, ಮೈಸೂರು ಭಾಗದ ಪ್ರಮುಖ ಜಲಾಶಯದಲ್ಲಿ ನೀರಿನ ಒಳಹರಿವು ಸ್ಥಿರವಾಗಿದ್ದು, ಭರ್ತಿಯಾಗುವ ಹಾದಿಯಲ್ಲಿದೆ.
ಕೃಷ್ಣಾ ಹಾಗೂ ಕೊಳ್ಳದ ಪ್ರಮುಖ ಡ್ಯಾಮ್ಗಳು
ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳ ಜಲಾಶಯಗಳಲ್ಲೂ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿದೆ.
ಆಲಮಟ್ಟಿ ಹಾಗೂ ನಾರಾಯಣಪುರ ಅಣೆಕಟ್ಟು: ಭಾರಿ ಪ್ರಮಾಣದ ಒಳಹರಿವು ದಾಖಲಾಗಿದ್ದು, ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ.
ತುಂಗಭದ್ರಾ, ಭದ್ರಾ, ಹಿಡಕಲ್ ಮತ್ತು ಮಲಪ್ರಭಾ: ಈ ಎಲ್ಲ ಜಲಾಶಯಗಳಲ್ಲೂ ಮಳೆಯ ಅಬ್ಬರದಿಂದಾಗಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ವಾಣಿವಿಲಾಸ ಸಾಗರ, ಬೆನ್ನಿಥೋರಾ, ಗಂಡೋರಿನಾಲಾ: ಒಳಹರಿವು ಮುಂದುವರಿದಿದ್ದು, ಜಲಕಳೆ ಹೆಚ್ಚಾಗಿದೆ.
ಇದನ್ನೂ ಓದಿ: Dam Water Level: ಕರ್ನಾಟಕದ ಜಲಾಶಯಗಳ ಇಂದಿನ ಲೇಟೆಸ್ಟ್ ರಿಪೋರ್ಟ್!
ರೈತರಿಗೆ ಹರ್ಷದ ಕ್ಷಣ
ಕಳೆದ ಕೆಲಕಾಲ ಮಳೆ ಕೈಕೊಟ್ಟಿದ್ದರಿಂದ ಕಂಗಾಲಾಗಿದ್ದ ಅನ್ನದಾತರಿಗೆ ಈಗಿನ ಜಲಾಶಯಗಳ ನೀರಿನ ಒಳಹರಿವು ಸಮಾಧಾನ ತಂದಿದೆ. ಮುಂಬರುವ ದಿನಗಳಲ್ಲಿ ಮಳೆಯ ಅಬ್ಬರ ಮುಂದುವರಿದರೆ ಬಹುತೇಕ ಜಲಾಶಯಗಳು ಭರ್ತಿಯಾಗುವ ಸಾಧ್ಯತೆಯಿದೆ.














